ಈ ದೇಶದಲ್ಲಿ ಜಮೀರ್ ಇರಲು ಲಾಯಕ್ಕಿಲ್ಲ, ಆತನನ್ನು ಆಲದ ಮರಕ್ಕೆ ನೇಣು ಹಾಕಿ: ಪ್ರಮೋದ್ ಮುತಾಲಿಕ್

Waves of Karnataka


 ಸಚಿವ ಜಮೀರ್ ಅಹಮದ್‍ರನ್ನು ಗಡಿಪಾರು ಮಾಡ್ಬೇಕು, ಸಚಿವ ಸ್ಥಾನದಿದ ಕಿತ್ತಾಕಬೇಕು ಎಂದು ಮಾತಾಡುತ್ತಿದ್ದಾರೆ. ಅದೆಲ್ಲ ಬೇಡ ಯಾವುದಾದರೂ ಆಲದ ಮರಕ್ಕೆ ನೇಣು ಹಾಕಿ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.


ಚಿಕ್ಕಮಗಳೂರಿನಲ್ಲಿ ದತ್ತಮಾಲೆ ಅಭಿಯಾನದ ಧರ್ಮಸಭೆಯಲ್ಲಿ ಅವರು ಮಾತನಾಡಿದ ಅವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ 25,000 ಬಾಂಗ್ಲಾದೇಶಿ ಮುಸಲ್ಮಾನರಿದ್ದಾರೆ. ಅವರನ್ನು ಜಮೀರ್ ಸಾಕಿ, ಓಟರ್ ಲಿಸ್ಟ್ ತಯಾರು ಮಾಡಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿಯವರು ಜಮೀರ್‍ ನನ್ನು ಗಡಿಪಾರು, ಕಿತ್ತಾಕಿ, ಸಸ್ಪೆಂಡ್ ಮಾಡಿ ಅಂತಿದ್ದಾರೆ. ಗಡಿಪಾರು, ಸಸ್ಪೆಂಡ್ ಬೇಡ ಯಾವುದಾರೂ ಆಲದಮರಕ್ಕೆ ನೇಣು ಹಾಕಿ. ಜಮೀರ್ ಈ ದೇಶದಲ್ಲಿ ಇರಲು ಲಾಯಕ್ಕಿಲ್ಲ. ಯಾರ ಭೂಮಿ, ಕಟ್ಟಡ ಬೇಕೋ ಅದನ್ನು ತೆಗೆದುಕೊಂಡು ನುಂಗಿ ನೀರು ಕುಡಿಯೋಕೆ ಇದು ನಿಮ್ಮ ಅಪ್ಪಂದ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ

.ಇಸ್ಲಾಮೀಕರಣದ ಉದ್ದೇಶದಿಂದ ಭೂಮಿ ಕಬಳಿಸಿ, ಮುಸ್ಲಿಂ ಜನಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ. ಮುಂದೆ ಕರ್ನಾಟಕದಲ್ಲಿ ಬರೀ ನಮಾಜ್ ಮಾಡುವುದು, ಬುರ್ಖಾ ಹಾಕುವುದೇ ಆಗುತ್ತದೆ. ವಕ್ಫ್ ಆಸ್ತಿ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯದಾದ್ಯಂತ 9. 40 ಲಕ್ಷ ಎಕರೆ ಜಾಗ ವಕ್ಫ್ ಮಂಡಳಿಗೆ ಸೇರಿದೆ. ಹೀಗಾಗಿ ಕೇಂದ್ರ ಸರ್ಕಾರವು ವಕ್ಫ್‌ ಕಾಯ್ದೆ ತಿದ್ದುಪಡಿ ಪ್ರಕ್ರಿಯೆ ಆರಂಭಿಸಿದೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.