ಸೆಂಟ್ರಲ್‌ ಜೈಲಿನಲ್ಲಿ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಬಿಸ್ಕತ್‌ ಹಾಕಿಲ್ವಾ ಸುಮ್ಮಿನಿರು ಅಂದ್ರಾ ಕರಿಯಾ!

Waves of Karnataka


 ಸೆಂಟ್ರಲ್‌ ಜೈಲಿನಲ್ಲಿ ನಟ ದರ್ಶನ್‌ (Actor Darshan) ಫೋಟೊ ವೈರಲ್‌ ಆಗಿದ್ದೆ ತಡ ಈಗ ಒಂದೊಂದೆ ವಿಚಾರಗಳು ಹೊರಬರುತ್ತಿವೆ. ಇಷ್ಟಕ್ಕೂ ಜೈಲು ಸೇರಿದ್ದ ನಟ ದರ್ಶನ್‌ಗೆ ರಾಜಾತಿಥ್ಯ ಸಿಕ್ಕಿದ್ದು ಯಾವಾಗಿನಿಂದ ಗೊತ್ತಾ? ಜೈಲುಪಾಲಾದ ಮೂರೇ ದಿನ ಸಾಮಾನ್ಯ ಕೈದಿಯಂತಿದ್ದ ದರ್ಶನ್, ಬಳಿಕ ನಾಲ್ಕನೇ ದಿನದಿಂದ ರಾಜಾತಥ್ಯ ಸಿಗುತಿತ್ತಂತೆ. ಇನ್ನು ಜೈಲು ಸಿಬ್ಬಂದಿ ನಿಮ್ಮ ಬ್ಯಾರಕ್‌ಗೆ ತೆರಳಿ ಎಂದು ಸೂಚಿಸುತ್ತಿದ್ದರಂತೆ. ಈ ವೇಳೆ ಫಿಲ್ಮಿ ಸ್ಟೈಲ್‌ನಲ್ಲೇ ದರ್ಶನ್‌ ಆವಾಜ್ ಹಾಕಿ ‘ಬಿಸ್ಕತ್ ಹಾಕಿಲ್ವಾ’ ಸುಮ್ಮನಿರು ಅಂತಿದ್ದರಂತೆ. ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಆದ ಬಳಿಕ ಒಂದೊಂದೆ ಸತ್ಯ ಹೊರಗೆ ಬರುತ್ತಿದೆ.

ದರ್ಶನ್ ಸಿಗರೇಟ್‌ ಸೇದುವ ಫೋಟೊ ವೈರಲ್ ಆದ ಬಳಿಕ ಪರಪ್ಪನ ಅಗ್ರಹಾರ ಜೈಲಿನ ಚಿತ್ರಣವೇ ಬದಲಾಗಿದೆ. ಒಂದೆಡೆ ಜೈಲು ಸಿಬ್ಬಂದಿ ಪ್ರತಿಭಟಿಸುತ್ತಿದ್ದರೆ, ಮತ್ತೊಂದೆಡೆ ಕೈದಿಗಳಿಂದಲೂ ಧರಣಿ ನಡೆದಿದೆ ಎನ್ನಲಾಗಿದೆ. ನಮಗೆ ಬೀಡಿ, ಸಿಗರೇಟ್ ಸಿಗುತ್ತಿಲ್ಲ. ನಮ್ಗೆ ಇರೋದಕ್ಕೆ ಆಗುತ್ತಿಲ್ಲ ಎಂದು ನಿನ್ನೆ ಶನಿವಾರ ಪ್ರತಿಭಟಿಸಿದ್ದಾರೆ. ಫೋಟೊ ವೈರಲ್ ಬಳಿಕ ಜೈಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಹಾಗಾಗಿ ಬೀಡಿ, ಸಿಗರೇಟ್ ಸಂಪೂರ್ಣ ಬಂದ್ ಆಗಿದೆ.